NCERT Class 6 Social Kingdoms Kings And An Early Repulic notes in kannada Medium

NCERT Class 6 Social Kingdoms Kings And An Early Repulic notes in kannada Medium  6 ನೇ ತರಗತಿ ಸಮಾಜ ಅಧ್ಯಾಯ-5 ರ ಅತ್ಯುತ್ತಮ ಸಂಕ್ಷಿಪ್ತ ಪ್ರಮುಖ ಅಂಶಗಳನ್ನುಇಲ್ಲಿ ನೀಡಲಾಗಿದೆ. ಈ ಪ್ರಮುಖ ಅಂಶಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.

NCERT Class 6 Social Kingdoms Kings And An Early Repulic notes in kannada Medium

ಹಾಯ್, ಹಲೋ, ಸ್ನೇಹಿತರೆ, ಎಲ್ಲರಿಗೂ 👏ಸಮಾಜ ವಿಜ್ಞಾನದ ಕೌತುಕಗಳನ್ನು ಪ್ರಸ್ತುತ ಪಡಿಸುವ ನನ್ನ ಈ ಕನ್ನಡಿಗರ ಬ್ಲಾಗ್ ಗೆ ಹೃದಯ ಪೂರ್ವಕ ಸ್ವಾಗತ ನಾವು ಈ ಅಧ್ಯಾಯದಲ್ಲಿ ಎನ್.ಸಿ.ಇ.ಆರ್ಟಿ  6 ನೇ ತರಗತಿ ಸಮಾಜ ಅಧ್ಯಾಯ 5 ರ ಅತ್ಯುತ್ತಮ ಸಂಕ್ಷಿಪ್ತ ಮಾದರಿ ಪ್ರಮುಖ ಅಂಶಗಳ ನ್ನು ಹಲವು ಸ್ಪರ್ದಾತ್ಮಕ ಪರೀಕ್ಷೆಗಳ ದೃಷ್ಟಿಯಲ್ಲಿ ಇಟ್ಟುಕೊಂಡು ಈ ಒಂದು ಬ್ಲಾಗ್ ಲೇಖನದಲ್ಲಿ NCERT Class 6 Social Kingdoms Kings And An Early Repulic notes in kannada Medium 6 ನೇ ತರಗತಿ ಸಮಾಜ ಅಧ್ಯಾಯ 5 ರ ಅತ್ಯುತ್ತಮ ಸಂಕ್ಷಿಪ್ತ ಮಾದರಿ ಪ್ರಮುಖ ಅಂಶಗಳನ್ನುಇಲ್ಲಿ ನೀಡಲಾಗಿದೆ. ಈ ಪ್ರಮುಖ ಅಂಶಗಳು ನಿಮ್ಮ ಎಲ್ಲಾ ರೀತಿಯ ಪರೀಕ್ಷೆಗಳ ತಯಾರಿಗೆ ಸಹಕಾರಿಯಾಗಲಿದೆ ಎಂಬುದು ನಮ್ಮ ಭಾವನೆ.ಈ ಲೇಖನ ನಿಮಗೆ ಅನುಕೂಲಕರವಾಗಿದ್ದಾರೆ, ದಯಮಾಡಿ ಲೈಕ್ ಮಾಡಿ, ಶೇರ್ ಮಾಡಿ. 

NCERT Class 6 Social Kingdoms Kings And An Early Republic ಪ್ರಮುಖ ಅಂಶಗಳು-
  1. ರಾಜರುಗಳ ಆಯ್ಕೆ 
  2. ಅಶ್ವಮೇಧ ಯಜ್ಞ
  3. ರಾಜ ಮತ್ತು ಪುರೋಹಿತರು
  4. ವರ್ಣಾಶ್ರಮ ಧರ್ಮ
  5. ಜನಪದಗಳ ವಿರೋಧ 
  6. ಮಹಾಜನಪದಗಳು

ಹಿಂದೆ ರಾಜರಾಗುತ್ತಿದ್ದ ವಿಧಾನ ಹೇಗೆ?

ಇಂದು ಮತದಾನದ ಮೂಲಕ ನಾಯಕರನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿದೆ.
ರಾಜರಾದ ಕೆಲವು ಪುರುಷರು: ಪ್ರಾಚೀನ ಭಾರತದಲ್ಲಿ, ರಾಜರಾಗಲು ವಿವಿಧ ಮಾರ್ಗಗಳು ಇದ್ದವು. ಕೆಲವು ರಾಜರುಗಳನ್ನು ಜನರು ಆಯ್ಕೆ ಮಾಡಿದ್ರೆ, ಇತರರು ದೊಡ್ಡ ಯಜ್ಞಗಳನ್ನು ಮಾಡುವ ಮೂಲಕ ರಾಜರಾದರು.
ಸುಮಾರು 3000 ವರ್ಷಗಳ ಹಿಂದೆ, ದೊಡ್ಡ ಯಾಗಗಳನ್ನು ನಡೆಸುವ ಮೂಲಕ ರಾಜರಾಗಿ ಗುರುತಿಸಲ್ಪಟ್ಟರು. ಅಶ್ವಮೇಧ ಯಾಗವು ಅಂತಹದೊಂದು ವಿಧಿ.

ಅಶ್ವಮೇಧ ಯಾಗ

  • ಒಂದು ಕುದುರೆಯನ್ನು ಸ್ವತಂತ್ರವಾಗಿ ಓಡಾಡಿಸಲಾಗುತ್ತಿತ್ತು ಮತ್ತು ಅದನ್ನು ರಾಜನ ಸೈನಿಕರು ಕಾವಲು ಕಾಯಿತ್ತಿದ್ದರು. 
  • ಈ ಕುದುರೆ ಇತರ ರಾಜರ ರಾಜ್ಯಗಳಿಗೆ ಹೋದರೆ ಮತ್ತು ಅಲ್ಲಿನ ರಾಜರು ಅದನ್ನು ತಡೆದು ನಿಲ್ಲಿಸಿದರೆ, ಅವರು ಆ ಸೈನಿಕರೊಂದಿಗೆ ಹೋರಾಡಬೇಕಾಗುತ್ತದೆ. 
  • ಅವರು ಕುದುರೆಯನ್ನು ಹೋಗಲು ಬಿಟ್ಟರೆ, ಯಾಗವನ್ನು ನಡೆಸಲು ಬಯಸಿದ ರಾಜನು ಬಲಶಾಲಿ ಎಂದು ಅವರು ಒಪ್ಪಿಕೊಂಡಂತೆ. 
  • ನಂತರ ಈ ರಾಜರನ್ನು ಯಾಗಕ್ಕೆ ಆಹ್ವಾನಿಸಲಾಗುತ್ತಿತ್ತು,ಯಾಗವನ್ನು ವಿಶೇಷವಾಗಿ ತರಬೇತಿ ಪಡೆದ ಪುರೋಹಿತರು ನಡೆಸುತ್ತಿದ್ದರು, ಅವರಿಗೆ ಉಡುಗೊರೆಗಳನ್ನು ನೀಡಲಾಗುತ್ತಿತ್ತು. 
  • ಯಾಗವನ್ನು ಆಯೋಜಿಸಿದ ರಾಜನನ್ನು ಬಹಳ ಶಕ್ತಿಶಾಲಿ ಎಂದು ಗುರುತಿಸಲಾಯಿತು, ಮತ್ತು ಬಂದವರು ಎಲ್ಲರೂ ಅವನಿಗೆ ಉಡುಗೊರೆಗಳನ್ನು ಅರ್ಪಿಸಿತ್ತಿದ್ದರು.
NCERT Class 6 Social Kingdoms Kings And An Early Repulic notes in kannada Medium

ರಾಜ ಮತ್ತು ಪುರೋಹಿತರು: 
  • ಪುರೋಹಿತರು ರಾಜನ ಆಸ್ಥಾನದ ಪ್ರಮುಖ ಸದಸ್ಯರಾಗಿದ್ದರು. ಅವರು ಯಜ್ಞಗಳನ್ನು ನಡೆಸುತ್ತಿದ್ದರು, ರಾಜನಿಗೆ ಸಲಹೆ ನೀಡುತ್ತಿದ್ದರು ಮತ್ತು ಧಾರ್ಮಿಕ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದರು.
  • ಈ ಯಾಗಗಳಲ್ಲಿ ರಾಜನು ಕೇಂದ್ರೀಯ ವ್ಯಕ್ತಿಯಾಗಿದ್ದನು. 
  • ಅವನಿಗೆ ಸಾಮಾನ್ಯವಾಗಿ ವಿಶೇಷ ಆಸನ, ಸಿಂಹಾಸನ ಅಥವಾ ಹುಲಿ ಚರ್ಮ ಇರುತ್ತಿತ್ತು. 
  • ಯುದ್ಧಭೂಮಿಯಲ್ಲಿ ತನ್ನ ಗೆಳೆಯನಾಗಿದ್ದ ಮತ್ತು ತನ್ನ ಸಾಹಸಗಳಿಗೆ ಸಾಕ್ಷಿಯಾಗಿದ್ದ ಅವನ ಸಾರಥಿ, ಅವನ ವೈಭವದ ಕಥೆಗಳನ್ನು ಹೇಳುತ್ತಿದ್ದ. 
  • ಅವನ ಸಂಬಂಧಿಕರು, ವಿಶೇಷವಾಗಿ ಅವನ ಹೆಂಡತಿಯರು ಮತ್ತು ಮಕ್ಕಳು, ವಿವಿಧ ಸಣ್ಣನ ಯಾಗಗಳನ್ನು ನಡೆಸಬೇಕಾಗಿತ್ತು. 
  • ಇತರ ರಾಜರು ಕೇವಲ ಪ್ರೇಕ್ಷಕರಾಗಿದ್ದರು, ಅವರು ಯಾಗದ ಪ್ರದರ್ಶನವನ್ನು ಕುಳಿತು ನೋಡಬೇಕಾಗಿತ್ತು. 
  • ಪುರೋಹಿತರು ರಾಜನ ಮೇಲೆ ಪವಿತ್ರ ಜಲವನ್ನು ಸಿಂಪಡಿಸುವುದು ಸೇರಿದಂತೆ ವಿಧಿಗಳನ್ನು ನಡೆಸುತ್ತಿದ್ದರು. 
  • ಸಾಮಾನ್ಯ ಜನರು, ವಿಶ್ ಅಥವಾ ವೈಶ್ಯರು ಸಹ ಉಡುಗೊರೆಗಳನ್ನು ನೀಡುತ್ತಿದ್ದರು. 
  • ಆದರೆ, ಪುರೋಹಿತರು ಶೂದ್ರರೆಂದು ಪರಿಗಣಿಸಿದಂತಹ ಕೆಲವು ಜನರನ್ನು ಹಲವು ಯಾಗಗಳಿಗೆ ಭಾಗವಹಿಸಲು ಅವಕಾಶ ಇರಲ್ಲಿಲ್ಲ. 

ವರ್ಣಾಶ್ರಮ ಧರ್ಮ: Varnas

ವರ್ಣಾಶ್ರಮ ಧರ್ಮವು ಸಾಮಾಜಿಕ ವ್ಯವಸ್ಥೆಯಾಗಿತ್ತು, ಇದು ಜನರನ್ನು ಜನ್ಮದ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ವಿಂಗಡಿಸಿತು. ಈ ವರ್ಗಗಳೆಂದರೆ 
  1. ಬ್ರಾಹ್ಮಣರು (ಪುರೋಹಿತರು),
  2. ಕ್ಷತ್ರಿಯರು (ಯೋಧರು ಮತ್ತು ಆಡಳಿತಗಾರರು), 
  3. ವೈಶ್ಯರು (ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳು) 
  4. ಶೂದ್ರರು (ದುಡಿಮೆಗಾರರು).
ಬ್ರಾಹ್ಮಣರು ವೇದಗಳನ್ನು ಅಧ್ಯಯನ ಮಾಡುವುದು (ಮತ್ತು ಕಲಿಸುವುದು), ಯಾಗಗಳನ್ನು ನಡೆಸುವುದು ಮತ್ತು ಉಡುಗೊರೆಗಳನ್ನು ಸ್ವೀಕರಿಸುವುದು. 
ಕ್ಷತ್ರಿಯರು ಯುದ್ಧಗಳನ್ನು ಹೋಗಲಾಡಿಸುವುದು ಮತ್ತು ಜನರನ್ನು ರಕ್ಷಿಸುವುದು. 
ವೈಶ್ಯರು ರೈತರು,ಒಕ್ಕಲಿಗರು ಮತ್ತು ವ್ಯಾಪಾರಿಗಳು ಆಗಿರಬೇಕೆಂದು ನಿರೀಕ್ಷಿಸಲಾಗಿತ್ತು. 
ಶೂದ್ರರು ಇತರ ಮೂರು ಗುಂಪುಗಳಿಗೆ ಸೇವೆ ಸಲ್ಲಿಸುವುದನ್ನು ನಿರೀಕ್ಷಿಸಲಾಗಿತ್ತು.

ಜನಪದಗಳು 

ದೊಡ್ಡ ಯಾಗಗಳನ್ನು ನಡೆಸಿದ ರಾಜರನ್ನು ಈಗ 'ಜನ'ರ ಬದಲಾಗಿ ಜನಪದಗಳ ರಾಜರೆಂದು ಗುರುತಿಸಲಾಗುತ್ತದೆ. 
ಉದಾ - ಭರತ ಜನ . ಪುರು ಜನ . 
ಜನಪದ ಪದವು  ಜನರು ನೆಲಸಿದ ಭೂಮಿಯನ್ನು ಸೂಚಿಸುತ್ತದೆ.
ಪುರಾತತ್ವ ಶಾಸ್ತ್ರಜ್ಞರು ದೆಹಲಿಯಲ್ಲಿನ ಪುರಾಣ ಕಿಲಾ, ಮೀರಟದ ಹತ್ತಿನಾಪುರ ಮತ್ತು ಎಟಾದ್ ಬಳಿಯ ಆತ್ರಂಜಿಖೇರಾ (ಉತ್ತರ ಪ್ರದೇಶದಲ್ಲಿವೆ) ಸೇರಿದಂತೆ ಈ ಜನಪದಗಳಲ್ಲಿ ಹಲವಾರು ವಸಾಹತುಗಳನ್ನು ಉತ್ಖನನ ಮಾಡಿದ್ದಾರೆ. 
ಜನರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು ಮತ್ತು ದನಕರುಗಳನ್ನೂ ಹಾಗೂ ಇತರ ಪ್ರಾಣಿಗಳನ್ನೂ ಸಾಕುತ್ತಿದ್ದರು ಎಂದು ಅವರು ಕಂಡುಕೊಂಡರು. 
ಅವರು ವಿವಿಧ ಬೆಳೆಗಳನ್ನು - ಅಕ್ಕಿ, ಗೋಧಿ, ಬಾರ್ಲಿ, ಕಾಳುಗಳು, ಕಬ್ಬು, ಎಳ್ಳು ಮತ್ತು ಸಾಸಿವೆ ಬೆಳೆದರು. 

ಮಣ್ಣಿನ ಮಡಿಕೆಗಳು (Painted Grey Ware)

ಅವರು ಮಣ್ಣಿನ ಮಡಿಕೆಗಳನ್ನು ತಯಾರಿಸಿದರು. ಇವುಗಳಲ್ಲಿ ಕೆಲವು ಬೂದು ಬಣ್ಣದ್ದಾಗಿದ್ದರೆ, ಇನ್ನು ಕೆಲವು ಕೆಂಪು ಬಣ್ಣದ್ದಾಗಿತ್ತು. 
ಈ ಸ್ಥಳಗಳಲ್ಲಿ ಕಂಡುಬಂದ ಮಡಿಕೆಗಳ ಒಂದು ವಿಶೇಷ ಪ್ರಕಾರವನ್ನು ಚಿತ್ರಿತ ಬೂದು ಮಣ್ಣಿನ ಸಾಮಾನುಗಳು (Painted Grey Ware) ಎಂದು ಕರೆಯಲಾಗುತ್ತದೆ.
ಹೆಸರಿನಿಂದಲೇ ಸ್ಪಷ್ಟವಾಗಿರುವಂತೆ, ಈ ಬೂದು ಮಡಿಕೆಗಳ ಮೇಲೆ ವಿನ್ಯಾಸಗಳನ್ನು ಚಿತ್ರಿಸಲಾಗಿದೆ, ಸಾಮಾನ್ಯವಾಗಿ ಸರಳ ರೇಖೆಗಳು ಮತ್ತು  ಜ್ಯಾಮಿತೀಯ ಆಕೃತಿಗಳು ಇರುತ್ತವೆ.
NCERT Class 6 Social Kingdoms Kings And An Early Repulic notes in kannada Medium


ಮಹಾಜನಪದಗಳು-

  • ಸುಮಾರು 2500 ವರ್ಷಗಳ ಹಿಂದೆ, ಕೆಲವು ಜನಪದಗಳು ಇತರ ಜನಪದಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು, ಮತ್ತು ಅವುಗಳನ್ನು ಮಹಾಜನಪದಗಳು ಎಂದು ಕರೆಯಲಾಯಿತು. 
  • ಹೆಚ್ಚಿನ ಮಹಾಜನಪದಗಳಿಗೆ ರಾಜಧಾನಿ ನಗರವಿತ್ತು, ಮಗಧ-ರಾಜಗೃಹ
  • ಇವುಗಳಲ್ಲಿ ಹಲವು ಕೋಟೆಗಳಿಂದ ಸುತ್ತುವರೆದಿದ್ದವು. ಅಂದರೆ ಅವುಗಳ ಸುತ್ತ ಮರ, ಇಟ್ಟಿಗೆ ಅಥವಾ ಕಲ್ಲುಗಳಿಂದ ಮಾಡಿದ ಬೃಹತ್ ಗೋಡೆಗಳನ್ನು ನಿರ್ಮಿಸಲಾಗಿತ್ತು. 
  • ಇತರ ರಾಜರ ದಾಳಿಗಳ ಭಯದಿಂದ ಜನರು ಈ ಕೋಟೆಗಳನ್ನು ನಿರ್ಮಿಸಿದ್ದಾರೆ ಎನ್ನಬಹುದು ಮತ್ತು ರಕ್ಷಣೆ ಅಗತ್ಯವಿತ್ತು. 
  • ತಮ್ಮ ನಗರಗಳ ಸುತ್ತ ನಿಜವಾಗಿಯೂ ದೊಡ್ಡ, ಎತ್ತರದ ಮತ್ತು ಭವ್ಯ ಗೋಡೆಗಳನ್ನು ನಿರ್ಮಿಸುವ ಮೂಲಕ ತಮ್ಮ ಶ್ರೀಮಂತಿಕೆ ಮತ್ತು ಪರಾಕ್ರಮವನ್ನು ಎಷ್ಟು ಹೆಚ್ಚು ತೋರಿಸಬೇಕೆಂದು ಬಯಸಿದ್ದಾರೆ ಎನ್ನಬಹುದು.
  • ಈ ರೀತಿಯಾಗಿ ಕೋಟೆಯೊಳಗಿನ ಭೂಮಿ ಮತ್ತು ಅಲ್ಲಿ ವಾಸಿಸುವ ಜನರನ್ನು ರಾಜನು ಹೆಚ್ಚು ಸುಲಭವಾಗಿ ನಿಯಂತ್ರಿಸಬಹುದಾಗಿತ್ತು.  ಈ ರೀತಿಯ ಭಗೀರಥ ಪ್ರಯತ್ನದ ಗೋಡೆಗಳನ್ನು ನಿರ್ಮಿಸಲು ಬಹಳಷ್ಟು ಯೋಜನೆಗಳು ಬೇಕಾಗುತ್ತದೆ. ಸಾವಿರಾರು, ಲಕ್ಷಾಂತರ ಇಟ್ಟಿಗೆ ಅಥವಾ ಕಲ್ಲುಗಳನ್ನು ಸಿದ್ಧಪಡಿಸಬೇಕಾಗಿತ್ತು. ಇದರಿಂದಾಗಿ ಸಾವಿರಾರು ಗಂಡಸರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಗಾಧ ಪರಿಶ್ರಮದ ಅಗತ್ಯವಿತ್ತು. ಇದಕ್ಕೆಲ್ಲಾ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕಾಗಿತ್ತು.

ಸೈನ್ಯಗಳ ನಿರ್ವಹಣೆ-

ಈ ಹೊಸ ರಾಜರು ಈಗ ಸೈನ್ಯಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. 
ಸೈನಿಕರಿಗೆ ರಾಜನು ವರ್ಷಪೂರ್ತಿ ನಿಯಮಿತವಾಗಿ ಸಂಬಳ ನೀಡಿ ನಿರ್ವಹಿಸುತ್ತಿದ್ದನು. 
ಕೆಲವು ಪಾವತಿಗಳನ್ನು ಚುಕ್ಕೆಗಳಿಂದ ಗುರುತು ಮಾಡಿದ ನಾಣ್ಯಗಳನ್ನು ಬಳಸಿ ಮಾಡಲಾಗುತ್ತಿತ್ತು.

Taxes ತೆರಿಗೆಗಳು.

ಮಹಾಜನಪದಗಳ ಆಡಳಿತಗಾರರು (ಪಕ್ಷಾಧಿಪತಿಗಳು) 
(ಎ) ದೊಡ್ಡ ಕೋಟೆಗಳನ್ನು ಕಟ್ಟಿಸುತ್ತಿದ್ದರು 
(ಬಿ) ದೊಡ್ಡ ಸೈನ್ಯಗಳನ್ನು ನಿರ್ವಹಿಸುತ್ತಿದ್ದರು, 
ಹೀಗಾಗಿ ಅವರಿಗೆ ಹೆಚ್ಚು ಸಂಪನ್ಮೂಲಗಳು ಬೇಕಾಗಿದ್ದವು. ಜನರಿಂದ ತೆರಿಗೆ ಬರುವ ಉಡುಗೊರೆಗಳನ್ನು ಅವಲಂಬಿಸುವ ಬದಲು, ಅವರು ನಿಯಮಿತವಾಗಿ ತೆರಿಗೆಗಳನ್ನು ವಸೂಲಿ ಮಾಡಲು ಪ್ರಾರಂಭಿಸಿದರು.

ತೆರಿಗೆ ವಿಧಾನಗಳು-
  1. ಬೆಳೆಗಳ ತೆರಿಗೆ : ಕೃಷಿಯಿಂದ ಬರುವ ಇಳುವರಿಯ ಮೇಲಿನ ತೆರಿಗೆ.
  2. ಕುಶಲಕರ್ಮಿಗಳ ತೆರಿಗೆ : ಕರಕುಶಲ ವಸ್ತುಗಳನ್ನು ತಯಾರಿಸುವವರು ಕಟ್ಟುವ ತೆರಿಗೆ.
  3. ಕಾಯುಕ ಜನಾಂಗದ ತೆರಿಗೆ : ಕಾಯುಕ ಜನಾಂಗದವರು ಪ್ರಾಣಿಗಳು ಅಥವಾ ಪ್ರಾಣಿಗಳ ಉತ್ಪನ್ನಗಳನ್ನು ತೆರಿಗೆಯಾಗಿ ನೀಡುತ್ತಿದ್ದರು.
  4. ವ್ಯಾಪಾರದ ಮೂಲಕ ಸರಕುಗಳ ತೆರಿಗೆ : ವ್ಯಾಪಾರದ ಮೂಲಕ ಸಾಗಿಸುವ ಸರಕುಗಳ ಮೇಲಿನ ತೆರಿಗೆ.
  5. ಬೇಟೆಗಾರರು ಮತ್ತು ಸಂಗ್ರಹಕಾರರು ರಾಜನಿಗೆ ಕಾಡು ಉತ್ಪನ್ನಗಳನ್ನು ಒದಗಿಸಬೇಕಾಗಿತ್ತು.  ಬೇಟೆಗಾರರು ಮತ್ತು ಸಂಗ್ರಹಕಾರರು ರಾಜನಿಗೆ ಕಾಡಿನಿಂದ ಹಣ್ಣು, ಹೂವು, ಮುಂತಾದ ಉತ್ಪನ್ನಗಳನ್ನು ತೆರಿಗೆಯಾಗಿ ಕೊಡುತ್ತಿದ್ದರು.

ಕೃಷಿಯಲ್ಲಿನ ಬದಲಾವಣೆಗಳು 

ಈ ಸಮಯದಲ್ಲಿ ಕೃಷಿಯಲ್ಲಿ ಎರಡು ಪ್ರಮುಖ ಬದಲಾವಣೆಗಳು ಸಂಭವಿಸಿದವು. 
  1. ಕಬ್ಬಿಣದ ನೇಗಿಲುಗಳ ಹೆಚ್ಚುತ್ತಿರುವ ಬಳಕೆ- ಮರದ ನೇಗಿಲುಗಳಿಗಿಂತ ಕಬ್ಬಿಣದ ನೇಗಿಲನ್ನು ಬಳಸಿದರೆ ಗಟ್ಟಿಯಾದ, ಮಣ್ಣನ್ನು ಉಳುಮೆ ಮಾಡಲು ಸುಲಭವಾಗುತ್ತದೆ, ಹೆಚ್ಚು ಧಾನ್ಯವನ್ನು ಉತ್ಪಾದಿಸಬಹುದು. 
  2. ಜನರು ನಾಟಿ ಪದ್ಧತಿಯನ್ನು ಪ್ರಾರಂಭಿಸಿದರು- ನೆಲದ ಮೇಲೆ ಬೀಜಗಳನ್ನು ಚದುರಿಸಿ ಮೊಳಕೆ ಬರುವ ಸಸ್ಯಗಳ ಬದಲಾಗಿ, ಮೊದಲು ಸಸ್ಯಗಳನ್ನು ಬೆಳೆಸಿ ನಂತರ ಹೊಲಗಳಲ್ಲಿ ನೆಡಲಾಯಿತು. ಇದರಿಂದಾಗಿ ಹೆಚ್ಚು ಸಸ್ಯಗಳು ಬದುಕುಳಿದು ಉತ್ಪಾದನೆ ಹೆಚ್ಚಾಯಿತು.

ಮಗಧ 

NCERT Class 6 Social Kingdoms Kings And An Early Repulic notes in kannada Medium

ಸುಮಾರು ೨೦೦ ವರ್ಷಗಳಲ್ಲಿ ಮಗಧವು ಅತ್ಯಂತ ಪ್ರಮುಖ ಮಹಾಜನಪದವಾಗಿ ಹೊರಹೊಮ್ಮಿತು. 
ಗಂಗಾ ಮತ್ತು ಸೋನ್ ನದಿಗಳು ಸೇರಿದಂತೆ ಹಲವು ನದಿಗಳು ಮಗಧದ ಮೂಲಕ ಹರಿಯುತ್ತಿದ್ದವು. 
ಇದು ಈ ಮೂರು ಕಾರಣಗಳಿಗೆ ಪ್ರಮುಖವಾಗಿತ್ತು. 
(ಎ) ಸಾರಿಗೆ 
(ಬಿ) ನೀರಿನ ಪೂರೈಕೆ 
(ಸಿ)  ಭೂಮಿಯ ಫಲವತ್ತತೆ. 
  1. ಮಗಧದ ಕೆಲವು ಭಾಗಗಳು ಕಾಡುಪ್ರದೇಶಗಳಾಗಿದ್ದವು. ಕಾಡುಗಳಲ್ಲಿ ವಾಸಿಸುತ್ತಿದ್ದ ಆನೆಗಳನ್ನು ಸೆರೆಹಿಡಿದು ಸೈನ್ಯಕ್ಕಾಗಿ ತರಬೇತಿ ನೀಡಲಾಗುತ್ತಿತ್ತು. 
  2. ಕಾಡುಗಳು ಮನೆಗಳು, ಗಾಡಿಗಳು ಮತ್ತು ರಥಗಳನ್ನು ನಿರ್ಮಿಸಲು ಮರವನ್ನೂ ಒದಗಿಸಿದವು. 
  3. ಕಬ್ಬಿಣದ  ಗಣಿಗಳು ಇದ್ದವು, ಇದನ್ನು ಬಲವಾದ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. 
  4. ಮಗಧದಲ್ಲಿ ಬಿಂಬಿಸಾರ ಮತ್ತು ಅಜಾತಶತ್ರು ಎಂಬ ಇಬ್ಬರು ಬಹಳ ಶಕ್ತಿಶಾಲಿ ರಾಜರುಗಳಿದ್ದರು, ಅವರು ಇತರ ಜನಪದಗಳನ್ನು ಜಯಿಸಾಲು ಪ್ರಯತ್ನಿಸುತ್ತಿದ್ದರು. 
  5. ಮಹಾಪದ್ಮ ನಂದ - ಉಪಖಂಡದ ವಾಯುವ್ಯ ಭಾಗದವರೆಗೆ ತನ್ನ ಪ್ರಭಾವವನ್ನು ವಿಸ್ತರಿಸಿದನು. 
  6. ಬಿಹಾರದಲ್ಲಿರುವ ರಾಜಗೃಹ (ಇಂದಿನ ರಾಜಗೀರ್) ಹಲವಾರು ವರ್ಷಗಳ ಕಾಲ ಮಗಧದ ರಾಜಧಾನಿಯಾಗಿತ್ತು.
  7. ನಂತರ ರಾಜಧಾನಿಯನ್ನು ಪಾಟಲಿಪುತ್ರಕ್ಕೆ (ಇಂದಿನ ಪಾಟ್ನಾ) ಸ್ಥಳಾಂತರಿಸಲಾಯಿತು.  

ವಜ್ಜಿ

NCERT Class 6 Social Kingdoms Kings And An Early Repulic notes in kannada Medium

  • ರಾಜಧಾನಿ - ವೈಶಾಲಿ (ಬಿಹಾರ) 
  • ಗಣ ಅಥವಾ ಸಂಘ ಎಂದು ಕರೆಯಲ್ಪಡುವ ವಿಭಿನ್ನ ರೀತಿಯ ಆಡಳಿತದವ್ಯವಸ್ಥೆಯನ್ನು ಹೊಂದಿತ್ತು. 
  • ಗಣ ಅಥವಾ ಸಂಘದಲ್ಲಿ ಒಬ್ಬ ರಾಜನು ಮಾತ್ರವಲ್ಲದೆ, ಅನೇಕ ರಾಜರುಗಳಿದ್ದರು. 
  • ಪ್ರತಿಯೊಬ್ಬರನ್ನೂ ರಾಜ ಎಂದು ಕರೆಯಲಾಗುತ್ತಿತ್ತು. 
  • ಈ ರಾಜರುಗಳು ಒಟ್ಟಾಗಿ ಧಾರ್ಮಿಕ ವಿಧಿಗಗಳನ್ನು ನಡೆಸುತ್ತಿದ್ದರು. 
  • ಅವರು ಸಭೆಗಳಲ್ಲಿಯೂ ಸೇರುತ್ತಿದ್ದರು ಮತ್ತು ಚರ್ಚೆ ಮತ್ತು ವಾದದ ಮೂಲಕ ಏನು ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂದು ನಿರ್ಧರಿತ್ತಿದ್ದರು. 
  • ಉದಾಹರಣೆಗೆ, ಅವರ ಮೇಲೆ ಶತ್ರು ದಾಳಿ ಮಾಡಿದರೆ,  ಎದುರಿಸಲು ಏನು ಮಾಡಬೇಕು ಎಂದು ಚರ್ಚಿಸಲು ಸಭೆ ಸೇರುತ್ತಿದ್ದರು. 
  • ಮಹಿಳೆಯರು, ದಾಸರು ಮತ್ತು ಕಮ್ಮಾರರು ಈ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಿರಲಿಲ್ಲ.
ALSO READ
ಹೊಸ ರೀತಿಯ ರಾಜರುಗಳು (3000 ವರ್ಷಗಳ ಹಿಂದೆ) : ಸುಮಾರು 3000 ವರ್ಷಗಳ ಹಿಂದೆ ಭಾರತದಲ್ಲಿ ಹೊಸ ರೀತಿಯ ಆಡಳಿತ ವ್ಯವಸ್ಥೆ ಉದಯವಾಯಿತು.
ಮಹಾಜನಪದಗಳು (2500 ವರ್ಷಗಳ ಹಿಂದೆ) (Mahajanapadagalụ : ಸುಮಾರು 2500 ವರ್ಷಗಳ ಹಿಂದೆ ಭಾರತದಲ್ಲಿ ಹಲವು ದೊಡ್ಡ ರಾಜ್ಯಗಳು ಅಸ್ತಿತ್ವಕ್ಕೆ ಬಂದವು, ಅವುಗಳನ್ನು ಮಹಾಜನಪದಗಳು ಎಂದು ಕರೆಯಲಾಗುತ್ತದೆ.
ಅಲೆಕ್ಸಾಂಡರನ ಆಕ್ರಮಣ,  (2300 ವರ್ಷಗಳ ಹಿಂದೆ) : ಸುಮಾರು 2300 ವರ್ಷಗಳ ಹಿಂದೆ ಅಲೆಕ್ಸಾಂಡರ್ ಎಂಬ ಗ್ರೀಕ್ ರಾಜ ಭಾರತದ ಮೇಲೆ ದಂಡೆತ್ತಿ ಬಂದನು. 
ಗಣಗಳ ಅಥವಾ ಸಂಘಗಳ ಅಂತ್ಯ (1500 ವರ್ಷಗಳ ಹಿಂದೆ) ಸುಮಾರು 1500 ವರ್ಷಗಳ ಹಿಂದೆ ಆಡಳಿತ ವ್ಯವಸ್ಥೆಯಲ್ಲಿ ಒಂದು ರೀತಿಯ ಗುಂಪು ಆಡಳಿತವಿದ್ದ ಗಣ ಅಥವಾ ಸಂಘಗಳ ಪದ್ಧತಿ ಕೊನೆಗೊಂಡಿತು.

👉NCERT Class 6 Social Kingdoms Kings And An Early Republic PDF Notes in Kannada Medium👈


👇NCERT Class 6 Social Kingdoms Kings And An Early Repulic notes in Kannada Medium FAQS👇

ಹಿಂದೆ ರಾಜರಾಗಲು ಯಾವ ವಿಧಾನಗಳಿದ್ದವು?

ಯಜ್ಞ: ದೊಡ್ಡ ಯಾಗಗಳನ್ನು ನಡೆಸುವ ಮೂಲಕ ರಾಜರಾಗುವುದು ಒಂದು ಪ್ರಮುಖ ವಿಧಾನವಾಗಿತ್ತು. ಉದಾಹರಣೆಗೆ, ಅಶ್ವಮೇಧ ಯಾಗ. ಜನಪದ: ಕೆಲವು ರಾಜರನ್ನು ಜನರು ಆಯ್ಕೆ ಮಾಡುತ್ತಿದ್ದರು. ಪರಂಪರೆ: ಕೆಲವೊಮ್ಮೆ, ರಾಜನ ಮಗನು ರಾಜನಾಗುತ್ತಿದ್ದನು.

ಯಾಗಗಳ ಪ್ರಾಮುಖ್ಯತೆ ಏನು?

ಯಾಗಗಳು ರಾಜನ ಶಕ್ತಿ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಸ್ಥಾಪಿಸಲು ಸಹಾಯ ಮಾಡಿದವು. ಯಾಗಗಳಲ್ಲಿ ಭಾಗವಹಿಸುವುದರಿಂದ ರಾಜನಿಗೆ ಸಂಪತ್ತು ಮತ್ತು ಪ್ರಭಾವವನ್ನು ಗಳಿಸಲು ಸಹಾಯವಾಯಿತು.

ವರ್ಣಾಶ್ರಮ ಧರ್ಮ ಏನು?

ವರ್ಣಾಶ್ರಮ ಧರ್ಮವು ಜನರನ್ನು ಜನ್ಮದ ಆಧಾರದ ಮೇಲೆ ನಾಲ್ಕು ವರ್ಗಗಳಾಗಿ ವಿಂಗಡಿಸುವ ಸಾಮಾಜಿಕ ವ್ಯವಸ್ಥೆಯಾಗಿದೆ. ಈ ವರ್ಗಗಳೆಂದರೆ ಬ್ರಾಹ್ಮಣರು (ಪುರೋಹಿತರು), ಕ್ಷತ್ರಿಯರು (ಯೋಧರು ಮತ್ತು ಆಡಳಿತಗಾರರು), ವೈಶ್ಯರು (ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳು) ಮತ್ತು ಶೂದ್ರರು (ದುಡಿಮೆಗಾರರು). ಯಾಗಗಳಲ್ಲಿ ಭಾಗವಹಿಸಲು ಕೆಲವು ವರ್ಗಗಳಿಗೆ ಮಾತ್ರ ಅವಕಾಶವಿತ್ತು.

ಮಹಾಜನಪದಗಳು ಯಾವುವು?

ಸುಮಾರು 2500 ವರ್ಷಗಳ ಹಿಂದೆ, ಕೆಲವು ಜನಪದಗಳು ಇತರ ಜನಪದಗಳಿಗಿಂತ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡವು ಮತ್ತು ಅವುಗಳನ್ನು ಮಹಾಜನಪದಗಳು ಎಂದು ಕರೆಯಲಾಯಿತು. ಕೆಲವು ಪ್ರಮುಖ ಮಹಾಜನಪದಗಳೆಂದರೆ ಮಗಧ, ವಜ್ಜಿ, ಗಾಂಧಾರ ಮತ್ತು ಕಾಂಭೋಜ.

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕಾಲಾನಂತರದಲ್ಲಿ ಯಾವ ಬದಲಾವಣೆಗಳು ಸಂಭವಿಸಿದವು?

ರಾಜರಾಗಲು ಯಜ್ಞಗಳ ಪ್ರಾಮುಖ್ಯತೆ ಕಡಿಮೆಯಾಯಿತು. ಗಣ ಅಥವಾ ಸಂಘಗಳಂತಹ ಗುಂಪು ಆಡಳಿತ ವ್ಯವಸ್ಥೆಗಳು ಕೊನೆಗೊಂಡವು. ಭಾರತದಲ್ಲಿ ಒಂದು ರಾಜ್ಯದ ಆಡಳಿತಕ್ಕೆ ಒಬ್ಬ ರಾಜನ ವ್ಯವಸ್ಥೆ ಬಂದಿತು. ಕಾಲಾನಂತರದಲ್ಲಿ, ಭಾರತದಲ್ಲಿ ವಸಾಹತುಶಾಹಿ ಆಡಳಿತ ಮತ್ತು ಸ್ವಾತಂತ್ರ್ಯದ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಬಂದಿತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.