ರೈತರ ಮುಖ್ಯ ಕಸುಬು ಕೃಷಿ. ಹಾಗಾಗಿ ರೈತರನ್ನು ಕೃಷಿಕರು ಎಂತಲೂ ಕರೆಯುತ್ತಾರೆ. ತಮ್ಮ ಜೀವನ ಸಾಗಿಸಲು ಕೃಷಿಕರು, ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.kseeb solutions for class 5 evs chapter 8.
ಈ ಪಾಠದ ಪ್ರಮುಖ ಅಂಶಗಳು-
- ಆಹಾರವು ಎಲ್ಲಿಂದ ಬರುತ್ತದೆ ಎಂಬುದನ್ನು ಕೃಷಿಯ ಹಂತಗಳ ಮೂಲಕ ಅರ್ಥೈಸಿಕೊಳ್ಳುವೆ.
- ಕೃಷಿ ಕಾರ್ಮಿಕರು, ಸಣ್ಣ ಕೃಷಿಕರು ಮತ್ತು ದೊಡ್ಡ ಕೃಷಿಕರ ಕೆಲಸಗಳು ಹಾಗೂ ಸಮಸ್ಯೆಗಳ ಬಗ್ಗೆ ತಿಳಿದು ಪರಿಹಾರಗಳನ್ನು ಸೂಚಿಸುವೆ.
- ಸಾವಯವ ಕೃಷಿ ಹಾಗೂ ರಾಸಾಯನಿಕ ಕೃಷಿಯನ್ನು ಅರ್ಥೈಸಿಕೊಂಡು, ವ್ಯತ್ಯಾಸ ಗುರುತಿಸುವೆ.
- ಮಳೆಯಾಧಾರಿತ ಕೃಷಿ ಭೂಮಿ, ನೀರಾವರಿ ಕೃಷಿ ಭೂಮಿ ಬಗ್ಗೆ ಅರಿತುಕೊಳ್ಳುವೆ.
- ಹನಿ ನೀರಾವರಿ ಹಾಗೂ ತುಂತುರು ನೀರಾವರಿಯನ್ನು ಅರ್ಥೈಸಿಕೊಂಡು ಎರಡೂ
- ನೀರಾವರಿ ಪದ್ಧತಿಯಲ್ಲಿ ಬೆಳೆಯುವ ಬೆಳೆಗಳನ್ನು ಪಟ್ಟಿ ಮಾಡುವೆ.
- ಕೃಷಿ ಜಮೀನಿನಲ್ಲಿ ಕೈಗೊಳ್ಳುವ ಸಾಂದ್ರ ಬೇಸಾಯ, ಮಿಶ್ರ ಬೇಸಾಯ ಹಾಗೂ ತೋಟಗಾರಿಕೆಯ ಬಗ್ಗೆ ಮಾಹಿತಿ ಪಡೆಯುವೆ.
- ಧಾನ್ಯ ಸಂಗ್ರಹಣೆಯ ಆಧುನಿಕ ಮತ್ತು ಸಾಂಪ್ರದಾಯಿಕ ವಿಧಾನಗಳು/ಸಾಧನಗಳನ್ನು ಗುರುತಿಸುವೆ.
kseeb solutions for class 5 evs chapter 8.
- ಉಳುಮೆ ಮಾಡುವುದು.
- ಬೀಜ ಬಿತ್ತನೆ ಮಾಡುವುದು.
- ನೀರು ಹಾಯಿಸುವುದು.
- ಗೊಬ್ಬರ ಹಾಕುವುದು.
- ಕಳೆ ಕೀಳುವುದು.
- ಕೀಟಗಳಿಂದ ಬೆಳೆಯನ್ನು ರಕ್ಷಣೆ ಮಾಡಲು ರಾಸಾಯನಿಕಗಳ ಸಿಂಪಡಣೆ ಮಾಡುವುದು.
- ಚೆನ್ನಾಗಿ ಬಂಡ ಬೆಳೆಗಳನ್ನು ಕಟಾವು ಮಾಡುವುದು.
Class 5 EVS Question answer Chapter 8 Agriculture.
ಇವು ಕೃಷಿಕರು ಬೆಳೆ ಬೆಳೆಯಲು ಅನುಸರಿಸುವ ಹಂತಗಳು. ಹೇಳಿಕೆಯನ್ನು ಸರಿಯಾದ ಚಿತ್ರದೊಂದಿಗೆ ನೀನು ಜೋಡಿಸಿರುವೆ. ಆದರೆ ಅವು ಕ್ರಮವಾಗಿಲ್ಲ. ಈ ಹಂತಗಳನ್ನು ಕಾಲಾನುಕ್ರಮವಾಗಿ ಕೆಳಗೆ ಬರೆ.ಉತ್ತರ-
- ಬೆಳೆ ಬೆಳೆಯಲು ನೆಲವನ್ನು ಉಳುಮೆ ಮಾಡುವುದು.
- ಬೆಳೆ ಬೆಳೆಯಲು ಬೀಜಗಳನ್ನು ಬಿತ್ತುವುದು.
- ಬೆಳೆಗಳು ಚೆನ್ನಾಗಿ ಬೆಳೆಯಲು ನೀರು ಹರಿಸುವುದು.
- ಬೆಳೆಗಳು ಚೆನ್ನಾಗಿ ಬೆಳೆಯಲು ರಾಸಾಯನಿಕಅಥವಾ ಸಾವಯವ ಗೊಬ್ಬರ ಹಾಕುವುದು.
- ಪ್ರಾಣಿ, ಪಕ್ಷಿ, ಕೀಟಗಳು ಮತ್ತು ರೋಗಗಳಿಂದ ಬೆಳೆಯನ್ನು ರಕ್ಷಿಸುವುದು.
- ಯಂತ್ರಗಳು ಅಥವಾ ಕೈಗಳಿಂದ ಬೆಳೆಗಳನ್ನು ಕಟಾವು ಮಾಡುವುದು.
- ಬಿಡುವಿನ ಸಮಯದಲ್ಲಿ ಇತರೆ ಕಸುಬುಗಳನ್ನು ಮಾಡುವುದು.
- ಉಪಕಸುಬುಗಳನ್ನು ರೂಢಿಸಿಕೊಳ್ಳುವುದು.
- ಗಳಿಸಿದ ಹಣದ ಬಳಕೆಯನ್ನು ಮಿತಗೊಳಿಸಿ ಉಳಿತಾಯದ ಕಡೆ ಗಮನ ನೀಡುವುದು.
- ಆಧುನಿಕ ಕೃಷಿಯಂತ್ರಗಳನ್ನು ಖರೀದಿಸಲು ಸಬ್ಸಿಡಿ ಸಾಲ ಪಡೆಯುತ್ತಾರೆ.
- ಕೃಷಿ ಚಟುವಟಿಕೆ ಮಾಡಲು ಬಡ್ಡಿ ರಹಿತ ಸಾಲ ಪಡೆಯುತ್ತಾರೆ.
- ಕಡಿಮೆ ನೀರನ್ನು ಒದಗಿಸಿ ಹೆಚ್ಚಿನ ಉತ್ತಮ ಇಳುವರಿ ಪಡೆಯಲು ಸಹಕಾರಿ.
- ನೀರಿನ ಮಿತ ಬಳಕೆ ಜೊತೆಗೆ ನೀರಿನ ಪೋಲನ್ನು ತಡೆಗಟ್ಟಬಹುದು.
- ಕಳೆ ನಿಯಂತ್ರಣ ಮಾಡಬಹುದು.
- ಕಬ್ಬು, ಜೋಳ, ಕಾಫಿ, ಇತರೆ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗಿದೆ.
- ಕಡಿಮೆ ನೀರನ್ನು ಒದಗಿಸಿ ಹೆಚ್ಚಿನ ಉತ್ತಮ ಇಳುವರಿ ಪಡೆಯಲು ಸಹಕಾರಿ.
- ನೀರಿನ ಮಿತ ಬಳಕೆ ಜೊತೆಗೆ ನೀರಿನ ಪೋಲನ್ನು ತಡೆಗಟ್ಟಬಹುದು.
ಚಟುವಟಿಕೆ : ತೋಟಗಾರಿಕೆಯಲ್ಲಿ ಬೆಳೆಯಲಾಗುವ ವಿವಿಧ ಹಣ್ಣುಗಳು, ತರಕಾರಿ,
ಹೂಗಳನ್ನು ಪಟ್ಟಿಮಾಡು. ಹಿರಿಯರ ನೆರವು ಪಡೆದುಕೊ.
_________________________ _________________________
_________________________ ________________________
Class 5 EVS Question answer Chapter 8 Agriculture.
Class 5 EVS Question answer.
5 EVS Question answer Chapter 8 Agriculture.
- ಆಹಾರ ಧಾನ್ಯಗಳು/ ಪದಾರ್ಥಗಳನ್ನು ಹೆಚ್ಚು ಬೆಳೆಯುತ್ತಿರುವುದರಿಂದ ಅವುಗಳನ್ನು ಸಂಗ್ರಹಿಸುವುದು ಅವಶ್ಯವಾಗಿದೆ.
- ಆಹಾರ ಧಾನ್ಯಗಳು/ ಪದಾರ್ಥಗಳ ಕೊರತೆ ನೀಗಿಸಲು ಅವುಗಳನ್ನು ಸಂಗ್ರಹಿಸುವುದು ಅವಶ್ಯವಾಗಿದೆ.
- ಆಹಾರ ಧಾನ್ಯಗಳು/ ಪದಾರ್ಥಗಳಿಗೆ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಸಂಗ್ರಹಿಸುವುದು ಅವಶ್ಯವಾಗಿದೆ.
ಕೃಷಿ FAQS-
ನಮ್ಮ ದೇಶದ ಮುಖ್ಯ ಕಸುಬು ಯಾವುದು?
ನಮ್ಮ ದೇಶದ ಮುಖ್ಯ ಕಸುಬು ಕೃಷಿ.
ಮೂರು ಬಗೆಯ ಕೃಷಿಕರು ಯಾರು?
ಉತ್ತರ- ೧) ಕೃಷಿ ಕಾರ್ಮಿಕರು ೨) ಸಣ್ಣ ಕೃಷಿಕರು ೩) ದೊಡ್ಡ ಕೃಷಿಕರು
ಕೃಷಿ ಕಾರ್ಮಿಕರು ಎಂದರೆ ಯಾರು?
ಉತ್ತರ-ಇವರಿಗೆ ತಮ್ಮದೇ ಸ್ವಂತ ಜಮೀನು ಇರುವುದಿಲ್ಲ. ತಮ್ಮ ಜೀವನ ಸಾಗಿಸಲು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ.
ಸಣ್ಣ ಕೃಷಿಕರು ಎಂದರೆ ಯಾರು?
ಉತ್ತರ-ಸಣ್ಣ ಕೃಷಿಕರಿಗೆ ತಮ್ಮದೇ ಆದ ಸ್ವಲ್ಪ ಜಮೀನು ಇರುತ್ತದೆ. ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳನ್ನು ಮಾರಿ ಬರುವ ಹಣದಿಂದ ಜೀವನ ಸಾಗಿಸುತ್ತಿರುತ್ತಾರೆ. ಇವರು ಸಹ ಸಮಸ್ಯೆಗಳನ್ನು ಹೊಂದಿದ್ದಾರೆ. ಉದಾಹರಣೆ : ಕೃಷಿ ಮಾಡಲು ಹಣದ ಅಭಾವವಿರುತ್ತದೆ. ಕೃಷಿ ಜಮೀನು ಕಡಿಮೆ ಇರುವುದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿರುತ್ತದೆ. ಕೃಷಿ ಜಮೀನಿಗೆ ನೀರಿನ ಸೌಲಭ್ಯ (ನೀರಾವರಿ) ಕಡಿಮೆ ಇರುತ್ತದೆ. ಹಲವು ಸನ್ನಿವೇಶಗಳಲ್ಲಿ ಜಮೀನಿಗೆ ನೀರು ದೊರೆಯುವುದೇ ಇಲ್ಲ. ಕೃಷಿ ಭೂಮಿಯ ಫಲವತ್ತತೆಗನುಗುಣವಾಗಿ ಹಾಗೂ ಋತುಮಾನಕ್ಕನುಗುಣವಾಗಿ ಬೆಳೆ ತೆಗೆಯಲು ಇವರಿಗೆ ಸರಿಯಾದ ಮಾರ್ಗದರ್ಶನ ಇರುವುದಿಲ್ಲ.
ದೊಡ್ಡ ಕೃಷಿಕರು ಎಂದರೆ ಯಾರು?
ಸಾಮಾನ್ಯವಾಗಿ ದೊಡ್ಡ ಕೃಷಿಕರು ಹೆಚ್ಚು ಜಮೀನು ಹೊಂದಿರುತ್ತಾರೆ. ಜಮೀನಿನಲ್ಲಿ ಕೃಷಿ ಕೆಲಸಗಳಿಗಾಗಿ ಕುಟುಂಬದ ಸದಸ್ಯರಲ್ಲದೆ, ಸಹಾಯಕರೂ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ದೊಡ್ಡ ಕೃಷಿಕರ ಬಗೆಗೆ ಕೆಲವು ಹೇಳಿಕೆಗಳನ್ನು ನೀಡಿದೆ. ಗಮನಿಸು. ಆಧುನಿಕ ಕೃಷಿಯಂತ್ರಗಳನ್ನು ಖರೀದಿಸಿ, ಬಳಸುತ್ತಾರೆ. ಧಾನ್ಯಗಳನ್ನು ಉಗ್ರಾಣಗಳಲ್ಲಿ ಸಂಗ್ರಹಿಸಿ ಉತ್ತಮ ಬೆಲೆ ಇದ್ದಾಗ ಮಾರಾಟಮಾಡುತ್ತಾರೆ. ಬ್ಯಾಂಕ್ಗಳ ಹಣಕಾಸು ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಾರೆ. ವಿವಿಧ ಬೆಳೆಗಳ ಕೃಷಿ ಮಾಡುವುದರಿಂದ ಇವರು ಹೆಚ್ಚಿನ ಆದಾಯ ಹೊಂದಿರುತ್ತಾರೆ.
ಕೃಷಿಕರು ಹೊಂದಿರುವ ಕೃಷಿ ಭೂಮಿ (ಜಮೀನು)ಯನ್ನು ಹೇಗೆ ವಿಭಾಗಿಸಲಾಗಿದೆ?
ಕೃಷಿಕರು ಹೊಂದಿರುವ ಕೃಷಿ ಭೂಮಿ (ಜಮೀನು)ಯನ್ನು ಮುಖ್ಯವಾಗಿ ಎರಡು ವಿಧದಲ್ಲಿ ವಿಭಾಗಿಸಲಾಗಿದೆ. ೧) ಮಳೆಯಾಧಾರಿತ ಕೃಷಿ ಭೂಮಿ ೨) ನೀರಾವರಿ ಕೃಷಿ ಭೂಮಿ ಮಳೆಯಾಧಾರಿತ ಕೃಷಿ ಭೂಮಿ ಎಂದರೇನು? ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿನ ಜಮೀನು ಮಳೆಯಾಧಾರಿತ ಕೃಷಿ ಭೂಮಿಯಾಗಿದೆ. ಕಡಿಮೆ ನೀರನ್ನು ಬಳಸುವ ಬೆಳೆಗಳನ್ನು ಭೂಮಿಯ ಮಣ್ಣಿಗನುಗುಣವಾಗಿ ಬೆಳೆಯುತ್ತಾರೆ. ಮಳೆಯಾಧಾರಿತ ಕೃಷಿ ಭೂಮಿಯ ಬೇಸಾಯವನ್ನು ಖುಷ್ಕಿ ಅಥವಾ ಒಣಭೂಮಿ ಬೇಸಾಯ ಎಂತಲೂ ಕರೆಯಲಾಗುವುದು.
ನೀರಾವರಿ ಕೃಷಿ ಎಂದರೇನು?
ಬೆಳೆಗಳಿಗೆ ಮಳೆಯ ನೀರನ್ನು ಹೊರತುಪಡಿಸಿದರೆ ಕೆರೆ, ಕಾಲುವೆ, ಬಾವಿ, ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತದೆ. ಹೀಗೆ ನೀರನ್ನು ಬಳಸಿ ಕೃಷಿ ಮಾಡುವುದನ್ನು ನೀರಾವರಿ ಕೃಷಿ ಎನ್ನುವರು.
ನೀರಾವರಿ ಬೆಳೆಗಳು ಎಂದರೇನು?
ನೀರಾವರಿ ಭೂಮಿಯಲ್ಲಿ ಮಣ್ಣಿಗೆ ತಕ್ಕಂತೆ ಕಬ್ಬು, ಭತ್ತ, ಹತ್ತಿಯಂತಹ ಬೆಳೆಗಳನ್ನು ಬೆಳೆಯುತ್ತಾರೆ. ಅವುಗಳನ್ನು ನೀರಾವರಿ ಬೆಳೆಗಳು ಎನ್ನುವರು.
ನೀರಾವರಿಯ ಆಕರಗಳಿರುವ ರೈತರು ನೀರು ಹೆಚ್ಚು ಪೋಲಾಗುವುದನ್ನು ತಡೆಗಟ್ಟಲು ವಿಶಿಷ್ಟ ನೀರಾವರಿ ಪದ್ಧತಿಗಳನ್ನು ಅನುಸರಿಸುತ್ತಾರೆ ಅವು ಯಾವುವು?
ನೀರಾವರಿಯ ಆಕರಗಳಿರುವ ರೈತರು ನೀರು ಹೆಚ್ಚು ಪೋಲಾಗುವುದನ್ನು ತಡೆಗಟ್ಟಲು ವಿಶಿಷ್ಟ ನೀರಾವರಿ ಪದ್ಧತಿಗಳನ್ನು ಅನುಸರಿಸುತ್ತಾರೆ. ಅವುಗಳೆಂದರೆ - ೧) ಹನಿ ನೀರಾವರಿ ೨) ತುಂತುರು ನೀರಾವರಿ
ಸಾಂದ್ರ ಬೇಸಾಯ ಎಂದರೇನು?
ಒಂದೇ ಕೃಷಿ ಜಮೀನಿನಲ್ಲಿ ವರ್ಷವೊಂದಕ್ಕೆ ೨ ರಿಂದ ೩ ಬೆಳೆಗಳನ್ನು ಬೆಳೆಯುವುದು. ಉದಾಹರಣೆಗೆ, ಜೋಳ, ಭತ್ತ, ರಾಗಿ, ಸೂರ್ಯಕಾಂತಿ, ಹತ್ತಿ, ಹುರಳಿ, ಕಡಲೆ, ತೊಗರಿ.
ಮಿಶ್ರ ಬೇಸಾಯ ಎಂದರೇನು?
ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದರ ಜೊತೆಗೆ ದನಕರು,ಕೋಳಿ, ರೇಷ್ಮೆ, ಜೇನು ಸಾಕಾಣಿಕೆ ಮಾಡುವುದು.
ತೋಟಗಾರಿಕೆ ಎಂದರೇನು?
ಆಹಾರದ ಬೆಳೆಗಳ ಬದಲಿಗೆ ಕೃಷಿ ಜಮೀನಿನಲ್ಲಿ ವಿವಿಧ ಹಣ್ಣುಗಳು, ತರಕಾರಿ, ಕಾಫಿ, ಟೀ ಅಥವಾ ಹೂಗಳನ್ನು ಬೆಳೆಯುವುದು.
PLEASE DO NOT ENTER ANY SPAM LINK IN THE COMMENT BOX